ಮಳೆ

ನೀಲ ವ್ಯೋಮ ಶಾಮವಾಗಿ; ಮುತ್ತು ಕಾಳು ಉದುರಿ ಜಾರಿ
ಹಸಿದು ಮೌನವಾದ ಜಗಕೆ ಮಾತು ಕಲಿಸಿತು
ಗಗನ ಭೇರಿ ಧ್ವನಿಯ ಮಾಡಿ; ಮುಗಿಲು ಮುತ್ತಿ ಮಿಂಚುಕಾರಿ
ಸಲಿಲ ಸೋಂಪು ವೀಣೆ ಮಿಡಿಯಿತು

ರವಿಯ ಉರಿಯ ಬೆವರ ಭಾರ ನೆಲವ ಹಗುರು ಮಾಡಿತು
ಹಸಿ ಚಿಮ್ಮಿ ಹರ್ಷ ಹೊಮ್ಮಿ ಹೋಂಪುಳಿ ಮಾಡಿತು
ಸೃಷ್ಟಿ ಸವಿಯು ವೃಷ್ಟಿ ಕರೆಗೆ ಕೈಯ ಬೀಸಿತು
ಗಾಳಿ ಓಡಿ ಜಗದೊಳಾಡಿ ಈಜು ಬಿದ್ದಿತು

ವರ್ಷಕಾಲ ಕೊಳಲ ಗಾನ ಹರ್ಷಕಂಠ ಕೂಗಿತು
ರವಿಯು ಬಾಡಿ; ಸಂಜೆ ಮೂಡಿ; ಎಲ್ಲಿಗೋ ಓಡಿ
ಮಿಂಚು ಮಿನುಗು, ನಾದ ಗುಡುಗು, ಹನಿಯು ಕುಣಿಯಿತು
ಕಾಡು ನಾಡು ಗಗನಬೀಡು ಸಗ್ಗವನೇ ಮಾಡಿತು

ಲತೆಯು ಉಬ್ಬಿ ತರುವ ತಬ್ಬಿ ಹೂವು ಕಾಯಿ ಸುರಿಸಿತು
ಮುಗಿಲದಾನ ಹಸಿರು ಶಾಲು ಸೃಷ್ಟಿ ಎಲ್ಲ ಹೊಚ್ಚಿತು
ಬೀಜ ಒಡೆದು, ಕುಡಿಗೆ ನೆಗೆದು ಚಲ್ವ ಚಿಗುರು ಕಂಡಿತು
ವಿಶ್ವವೆಲ್ಲ ನಲಿದು ನಿಂತು ಯೌವನವು ಹೊಮ್ಮಿತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಗರಣ
Next post ಅವನೇ ಬಂದ

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

cheap jordans|wholesale air max|wholesale jordans|wholesale jewelry|wholesale jerseys